ಉಡುಪಿ : ಹಸುವಿನ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಂಬಳದ ಕೋಣಗಳು ಬೆಂಕಿಗೆ ಆಹುತಿಯಾದ ಘಟನೆ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕಾಂತಾವರದ ಅಶೋಕ್ ಶೆಟ್ಟಿ ಅವರ ಕೊಟ್ಟಿಗೆಗೆ ಅಚಾನಕ್ಕಾಗಿ ಬೆಂಕಿ ಬಿದ್ದಿದೆ. ಬೆಂಕಿಯ ತೀವ್ರತೆಗೆ ಕೊಟ್ಟಿಗೆ ಒಳಗೆ ಕಟ್ಟಿಹಾಕಲಾಗಿದ್ದ ಅಪ್ಪು ಮತ್ತು ತೋನ್ಸೆ ಹೆಸರಿನ ಕಂಬಳದ ಕೋಣಗಳು ಸಂಪೂರ್ಣ ಧಾರುಣವಾಗಿ ಸಾವನ್ನಪ್ಪಿವೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನು ಈ ಎರಡು ಕೋಣಗಳು 2022-23ನೇ ಸಾಲಿನ ಕನಹಲಗೆ ಚಾಂಪಿಯನ್ ಆಗಿದ್ದವು. ಹಲವು ಜಿಲ್ಲಾ ಮಟ್ಟದ ಕಂಬಳಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಅಪ್ಪು ಮತ್ತು ತೋಸೆ ಕೋಣಗಳ ದಾರುಣ ಸಾವಿಗೆ ಕಂಬಳಪ್ರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.
