Monday, June 30, 2025

spot_img

ಕುಂಜಾಲು ಬಳಿ ಗೋವಿನ ರುಂಡ ಪತ್ತೆ: ಆರೋಪಿಗಳು ವಶಕ್ಕೆ

ಬ್ರಹ್ಮಾವರ : ಬ್ರಹ್ಮಾವರದ ಕುಂಜಾಲು ಬಳಿ ಗೋವಿನ ರುಂಡ ಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ. ರಾಮ ಕುಂಜಾಲು (49) ಪ್ರಸಾದ್‌ ಕುಂಜಾಲು(21) ,ನವೀನ್‌ ಮಟಪಾಡಿ(35) ,ಕೇಶವ ನಾಯ್ಕ್‌ ಅಡ್ಜಿಲ್ (50),ಸಂದೇಶ ಕುಂಜಾಲು(35) , ರಾಜೇಶ್ ಕುಂಜಾಲು (28) ಬಂಧಿತ ಆರೋಪಿಗಳು, 6ನೇ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಶನಿವಾರ ತಡರಾತ್ರಿ 11:30ರ ಸುಮಾರಿಗೆ ಆರೂರು ಗ್ರಾಮ ವ್ಯಾಪ್ತಿಯ ಕುಂಜಾಲು ಜಂಕ್ಷನ್‌ ಬಳಿ ಗೋವಿನ ತಲೆ ಮತ್ತು ಚರ್ಮದ ಭಾಗ ಪತ್ತೆಯಾಗಿತ್ತು. ರಾಮ ಮಂದಿರ ಬಳಿಯ ರಿಕ್ಷಾ ನಿಲ್ದಾಣದ ಬಳಿ ಈ ಕಳೆಬರ ಪತ್ತೆಯಾದ ಹಿನ್ನಲೆಯಲ್ಲಿ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಯಾರೋ ಗೋವನ್ನು ಕಳವು ಮಾಡಿ ಮಾಂಸ ಮಾಡಿ ಅದರ ಅವಶೇಷಗಳನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ರಹ್ಮಾವರ ಪೊಲೀಸ್‌ ರು ಒಟ್ಟು 4 ತಂಡ ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದರು. ಮೊದಲು ಸಿಸಿ ಕ್ಯಾಮೆರಾ ದೃಶ್ಯಾವಳಿ ಮತ್ತು ವಾಹನ ಚಲನೆಯ ಆಧಾರದ ಮೇಲೆ ತನಿಖೆ ನಡೆಸಿದಾಗ ಒಟ್ಟು ಏಳು ಜನ ಆರೋಪಿಗಳ ಪತ್ತೆಯಾಗಿದ್ದು, ದನವನ್ನು ಕಡಿದು ಅದರ ಅವಶೇಷಗಳನ್ನು ವಾಹನದಲ್ಲಿ ಸಾಗಿಸುವಾಗ ಅದರ ಕೆಲವು ಅವಶೇಷಗಳು ರಸ್ತೆಯಲ್ಲಿ ಬಿದ್ದು ಹೋಗಿರುವುದು ಪತ್ತೆಯಾಗಿದೆ. ಸದ್ಯ ಪ್ರಕರಣದಲ್ಲಿ ಭಾಗಿಯಾದ 5 ಜನ, ಸ್ಕೂಟರ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles