ಕಾರ್ಕಳ: ಕಾರ್ಕಳ ತಹಶೀಲ್ದಾರ್ ಕಚೇರಿಯ ಹೊರಭಾಗದಲ್ಲಿ ತಾಲೂಕು ಪಂಚಾಯತ್ ಸದಸ್ಯ ರೋರ್ವರು ಆರ್ ಟಿಸಿ ಕಾಪಿ ಪಡೆಯಲು ಹೆಣಗಾಡಿ ರಂಪಾಟ ಮಾಡಿದ ವಿಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸಜಿತ್ ಶೆಟ್ಟಿ ಶಿರ್ಲಾಲು ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ. ತಮಗೆ ಆದ ಸಮಸ್ಯೆಯನ್ನು ವಿಡಿಯೋ ಶೂಟ್ ಮಾಡಿಸಿ, ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಫೋಟೋ ಹರಿಬಿಟ್ಟು ಸಜಿತ್ ಶೆಟ್ಟಿ ಅವರು ಕಾರ್ಕಳ ತಾಲೂಕು ಆಡಳಿತ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇ 22ರಂದು ಈ ಘಟನೆ ನಡೆದಿದೆ. ಆರ್ಟಿಸಿ ಕಾಪಿ ಪಡೆಯಲೆಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಜಿತ್ ಶೆಟ್ಟಿ ಶಿರ್ಲಾಲು ಅವರು ತಾಲೂಕು ಕಚೇರಿಗೆ ಹೋಗಿದ್ದರು. ಆರ್ಟಿಸಿ ಗಾಗಿ ಅರ್ಜಿ ಸಲ್ಲಿಸಿದ್ದರೂ ಅವರಿಗೆ ಆರ್ಟಿಸಿ ಕಾಪಿ ಕೈಸೇರದೇ ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿ ನಿರ್ಮಾಣವಾದ ಹಿನ್ನಲೆಯಲ್ಲಿ ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಕಾಯುತ್ತಿದ್ದೇನೆ. ಸಂಜೆ 4.30ಕ್ಕೆ ಓಪನ್ ಮಾಡುತ್ತಾರೆ. ಯಾವುದೇ ಒಂದು ಆರ್ಟಿಸಿ ಕೊಡುತ್ತಿಲ್ಲ. ರಾಜ್ಯ ಸರಕಾರ ಇದೆಯೋ ಇಲ್ಲವೋ, ಯಾರು ಕೇಳುವಾಗೇ ಇಲ್ಲವೋ? ಕಾರ್ಕಳ ತಾಲೂಕು ಕಚೇರಿ ಬೋಕರ್ಗಳಾದಾ? ನಾನು ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಂತ ಏರುಧ್ವನಿಯಲ್ಲಿ ಮಾತನಾಡಿದ್ದಾರೆ.

ಬಳಿಕ ಸ್ಥಳಕ್ಕೆ ಬಂದ ತಹಶೀಲ್ದಾರ್ ಪ್ರದೀಪ್ ಆರ್. ಪ್ರತಿಕ್ರಿಯಿಸಿದ ತಹಶೀಲ್ದಾರ್ ಪ್ರದೀಪ್ ಆರ್ ಅವರು ನಿಧಾನವಾಗಿ ಮಾತನಾಡಿ, ಕುಡಿದು ಬಂದು ಗಲಾಟೆ ಮಾಡದಂತೆ ಸೂಚಿಸಿದ್ದಾರೆ. ಇದಕ್ಕೆ ಮಾತು ಮಾತು ಬೆಳೆದು ಸಜಿತ್ ಅವರು ನಾನು ಜೀವಮಾನದಲ್ಲೇ ಕುಡಿದಿಲ್ಲ ವೈದ್ಯಕೀಯ ಪರೀಕ್ಷೆ ಮಾಡಿ ಎಂದಿದ್ದಾರೆ. ಸದ್ಯ ವಾಗ್ವಾದದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಲೂಕು ಪಂಚಾಯತ್ ಕಛೇರಿಯಲ್ಲಿ ಆಗುತ್ತಿರುವ ಸಮಸ್ಯೆ ಮತ್ತು ವಾದವಿವಾದಗಳ ಕುರಿತು ಜಾಲತಾಣದಲ್ಲಿ ಪರಿವಿರೋಧ ಚರ್ಚೇ ಮುಂದುವರಿದಿದೆ.