ಬೆಳ್ತಂಗಡಿ: ಇಲ್ಲಿನ ಉಜಿರೆ ಟಿ.ಬಿ.ಕ್ರಾಸ್ ಬಳಿ ಚಲಿಸುತ್ತಿದ್ದಾಗಲೇ ಕೆ.ಎಸ್.ಆರ್.ಟಿ.ಸಿ ಬಸ್ನ ಹಿಂಬದಿಯ ಎರಡು ಟಯರ್ ಕಳಚಿ ಬಿದ್ದ ಘಟನೆಯೊಂದು ಜ.30 ರ ಬೆಳಿಗ್ಗೆ ನಡೆದಿದೆ. ಉಜಿರೆ ಮೂಲಕ ಬೆಳ್ತಂಗಡಿಗೆ ಬರುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ನ ಹಿಂಬದಿಯ ಎರಡು ಟಯರ್ ಕಳಚಿ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.