ಉಡುಪಿ ಜಿಲ್ಲಾ ಮಿನುಗಾರರ ಮತ್ತು ಮೀನು ಕಾರ್ಮಿಕರ ಸಂಘ.ರಿ. (ಸಿಐಟಿಯು) ಇದರ ಸಮಾವೇಶ ಬನ್ನಂಜೆ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು. ಸಮಾವೇಶ ಉದ್ಘಾಟಿಸಿ ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ಮಾತನಾಡಿದರು ದುಡಿಯುವ ವರ್ಗದ ಕಾರ್ಮಿಕರಿಗೆ ಸರಕಾರದ ಕೆಲವು ಕಾನೂನು ತಿದ್ದುಪಡಿಯಿಂದಾಗಿ ಸರಿಯಾದ ವೇತನ,ಕೆಲಸ ಸಿಗುತ್ತಿಲ್ಲ.ಮೀನುಗಾರಿಕೆಯಲ್ಲಿ ದುಡಿಯುವ ಕಾರ್ಮಿಕರು ಇಂದು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
ಸಭೆಯ ಅಧ್ಯಕ್ಷತೆ ಯನ್ನು ಕೆ.ಶಂಕರ್ ವಹಿಸಿದ್ದರು. ಬೀಡಿ ಅಂಡ್ ಟೊಬ್ಯಾಕೋ ಲೆಬರ್ ಯೂನಿಯನ್ ಉಡುಪಿ ಇದರ ಕಾರ್ಯದರ್ಶಿ ಉಮೇಶ್ ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ವೇದಿಕೆಯಲ್ಲಿ ಮೀನುಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್ ಪ್ರಾಸ್ತಾವಿಕ ವಾಗಿ ಮಾತಾನಾಡಿದು. ಮುಖಂಡರಾದ ಅನ್ವರ್ ಕಟಪಾಡಿ,ಇಸ್ಮಾಯಿಲ್ ಕಾಪು,ಇಕ್ಬಾಲ್ ಉಡುಪಿ ಉಪಸ್ಥಿತರಿದ್ದರು.

ಪ್ರಮುಖ ನಿರ್ಣಯಗಳು–
1.ಮೀನುಗಾರರಿಗೆ ಹಾಗೂ ಮೀನು ಕಾರ್ಮಿಕರಿಗೆ ಮತ್ತು ಮೀನುಗಾರಿಕೆಯಲ್ಲಿ ಕೆಲಸ ಮಾಡುವ ಎಲ್ಲಾ ವಿಭಾಗದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಭಾಗವಾಗಿ ಕಲ್ಯಾಣ ಮಂಡಳಿ ಯೊಂದನ್ನು ರಾಜ್ಯದಲ್ಲಿ ರಚಿಸಬೇಕು,ತನ್ಮೂಲಕ ಅಪಘಾತ ಸಂಭವಿಸಿದಲ್ಲಿ ಪರಿಹಾರ,ವಸತಿ,ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಹೆಣ್ಣು ಮಕ್ಕಳಿಗೆ ಮದುವೆ ಸಹಾಯ ಧನ ಸವಲತ್ತುಗಳನ್ನು ನೀಡಬೇಕು.
2 ಮೀನುಗಾರರಿಗೆ ಹಾಗೂ ಮೀನು ಕಾರ್ಮಿಕರಿಗೆ 60 ವರ್ಷ ಪ್ರಾಯದ ನಂತರ ತಿಂಗಳಿಗೆ ರೂ 6000/ ಪಿಂಚಣಿ ನೀಡಬೇಕು
3ಅಪಾಘತದಲ್ಲಿ ಮರಣ ಹೊಂದಿದ್ದಲ್ಲಿ 20ಲಕ್ಷ ರೂ ಪರಿಹಾರ ನೀಡಬೇಕು.
4 ಕೇಂದ್ರ ಸರಕಾರ ಮೀನುಗಾರಿಕಾ ಉದ್ಯಮಕ್ಕಿರುವ ಆರ್ಥಿಕ ಪಾಲು ಹೆಚ್ಚಿಸಬೇಕು.
5 . ಮಳೆಗಾಲದಲ್ಲಿ 3ತಿಂಗಳು ಮೀನುಗಾರರ ಕುಟುಂಬಕ್ಕೆ ಊಚಿತ ರೇಷನ್ ನೀಡಬೇಕು.
ಒಟ್ಟು 15 ಬೇಡಿಕೆಗಳ ನಿರ್ಣಯಗಳನ್ನು ಮಂಡಿಸಲಾಯಿತು
ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕ ಸಂಘ.ರಿ.( ಸಿಐಟಿಯು) ನೂತನ ಸಮಿತಿ ಮುಂದಿನ ಮೂರು ವರ್ಷಕ್ಕೆ ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಕೆ.ಶಂಕರ್, ಕುಂದಾಪುರ. ಅಧ್ಯಕ್ಷ ರಾಗಿ ಇಸ್ಮಾಯಿಲ್ ಕಾಪು, ಉಪಾಧ್ಯಕ್ಷ ರಾಗಿ ವಸಂತ ಕೋಳಲಗಿರಿ, ಸೈಯದ್ ಕಟಪಾಡಿ. ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್ ಕಟಪಾಡಿ. ಜೊತೆ ಕಾರ್ಯದರ್ಶಿ ಅನ್ವರ್ ಕಟಪಾಡಿ, ಅಕ್ಬರ್ ಕಾಪು. ಕೋಶಾಧಿಕಾರಿ ಇಮ್ರಾನ್ ಉಡುಪಿ, ಸಮಿತಿ ಸದಸ್ಯರು ಖಾದ್ರಿ ಸಾಹೇಬ್ ಕಾಪು, ಪ್ರಕಾಶ್ ಪೂಜಾರಿ ಪಣಿಯೂರು, ಬಶೀರ್ ಬೆಳಪು, ಲತೀಫ್ ಆರಿಫ್ ಬೈಕಾಡಿ, ಇಲಿಯಾಸ್ ಪಡುಬಿದ್ರಿ, ರಿಯಾಜ್ ಬೈಕಾಡಿ, ಸಮ್ಮದ್ ಕಟಪಾಡಿ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.