Thursday, October 23, 2025

spot_img

ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರ ಸಂಘ(ನಿ.) : ವಾರ್ಷಿಕ ಮಹಾಸಭೆ

ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರ ಸಂಘ(ನಿ.) ಇದರ ವಾರ್ಷಿಕ ಮಹಾಸಭೆ ಉಡುಪಿ  ಜಿಲ್ಲಾ ಪೊಲೀಸ್‌ ಕಛೇರಿಯ ಸೆಂಟಿನಲ್ ಹಾಲ್ ನಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸುಧಾಕರ ಎಸ್‌. ನಾಯ್ಕ್ ಕೆ.ಎಸ್.ಪಿ.ಎಸ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರು, ಸಂಘದ 2024-25 ನೇ ವರ್ಷದಲ್ಲಿ ಸದಸ್ಯರಿಗೆ 14% ಡಿವಿಡೆಂಡ್ ಫೋಷಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್ ಐ.ಪಿ.ಎಸ್, ಅವರು  ಎಸ್.‌ ಎಸ್.‌ ಎಲ್.‌ ಸಿ. ಹಾಗೂ ಪಿ.ಯು.ಸಿ. ಯಲ್ಲಿ 85% ಗಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ 52 ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಿ ಹಿತವಚನ ನುಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವೈ.ಎಸ್.ಪಿ.(ಸಶಸ್ತ್ರ) ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ನಿರ್ದೇಶಕರು ಹಾಜರಿದ್ದರು.

 ರಾಘವೇಂದ್ರ ದೇವಾಡಿಗ ಸ್ವಾಗತಿಸಿದರು. ಸಂಘದ ಖಾಸಗಿ ಕಾರ್ಯದರ್ಶಿ, ಜಯಶೀಲ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು, ಶಿವಾನಂದ ಬಿ. ಇವರು ವಂದಿಸಿದರು. ಯೋಗೇಶ್‌ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles