Monday, June 30, 2025

spot_img

“ಆ್ಯಂಡ್ ದಿ ವ್ಯಾಲಿ ರಿಮೈನ್ಡ್ ಸೈಲೆಂಟ್” ಕನ್ನಡಕ್ಕೆ…

ಉಡುಪಿ: ಮಣಿಪಾಲದ ವೈದ್ಯ ಮೂಲತಃ ಕಾಶ್ಮೀರಿ ಪಂಡಿತರಾಗಿರುವ ಡಾ.ರಾಹುಲ್ ಮೆಗಝಿನ್ ಅವರ “ಆ್ಯಂಡ್ ದಿ ವ್ಯಾಲಿ ರಿಮೈನ್ಡ್ ಸೈಲೆಂಟ್”  ಇಂಗ್ಲೀಷ್ ಕೃತಿಯ ಕನ್ನಡ ಅನುವಾದ ಕಣ್ಣೀರ ಕಣಿವೆ ಫೆ.18 ರಂದು ಸಂಜೆ 4.30 ಕ್ಕೆ ಕೃಷ್ಣಮಠದ ರಾಜಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಕೃತಿಯ ಅನುವಾದಕ ಉದಯ್ ಕುಮಾರ್ ಹಬ್ಬು ತಿಳಿಸಿದ್ದಾರೆ. 

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂಧ್ರತೀರ್ಥರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪುಸ್ತಕವನ್ನು ಅಯೋಧ್ಯ ಪ್ರಕಾಶನದ ರೋಹಿತ್ ಚಕ್ರತೀರ್ಥ ಬಿಡುಗಡೆಗೊಳಿಸುವರು ಎಂದು ತಿಳಿಸಿದರು. ಶ್ರೀನಗರದ ನಿವೃತ್ತ ಪ್ರಾಧ್ಯಪಕ ಡಾ.ಮನಮೋಹನ್ ಲಾಲ್ ಕಿಶನ್ ಕಾರ್ಯಕ್ರಮ ಉದ್ಘಾಟಿಸುವರು. ಮೂಲಕೃತಿಕಾರ ಡಾ.ರಾಹುಲ್ ಮೆಗಝಿನ್ ಉಪಸ್ಥಿತರಿರಲಿದ್ದಾರೆ ಎಂದರು. 

ಈ ಕೃತಿಯೂ 1990 ರ ದಶಕದಲ್ಲಿ ಕಾಶ್ಮೀರಿ ಮುಸಲ್ಮಾನರ ಭಯೋತ್ಪಾದಕರ ಕೃತ್ಯಗಳಿಂದ ಹಿಂದೂಗಳು ಕಾಶ್ಮೀರದಿಂದ ಜಮ್ಮುವಿಗೆ ಪಲಾಯನ ಮಾಡಬೇಕಾಯಿತು. ಕಾಶ್ಮೀರಿ ಪಂಡಿತರ ಕಷ್ಟಗಳ ಸರಣಿ ಘಟನೆಗಳು ಈ ಪುಸ್ತಕದಲ್ಲಿ ದಾಖಲಾಗಿದೆ ಎಂದರು.  ಪತ್ರಿಕಾಗೋಷ್ಠಿಯಲ್ಲಿ ಮೂಲಕೃತಿಕಾರ ಡಾ.ರಾಹುಲ್ ಮೆಗಝಿನ್, ನಗರದ ನಿವೃತ್ತ ಪ್ರಾಧ್ಯಾಪಕ ಡಾ.ಮನಮೋಹನ್ ಲಾಲ್ ಕಿಶನ್ ಉಪಸ್ಥಿತರಿದ್ದರು. 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles