Monday, June 9, 2025

spot_img

ಅನೆಕ್ಸ್‌ ಕೋರ್ಟ್ ಕಟ್ಟಡಕ್ಕೆ ನ್ಯಾ| ಇ.ಎಸ್.ಇಂದಿರೇಶ್ ಗುದ್ದಲಿ ಪೂಜೆ

ಉಡುಪಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅನೆಕ್ಸ್‌ ಕೋರ್ಟ್ ಕಟ್ಟಡಕ್ಕೆ ಶುಕ್ರವಾರ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾ| ಇ.ಎಸ್.ಇಂದಿರೇಶ್ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ಈ ಕಟ್ಟಡ ನಿರ್ಮಾಣವಾಗಬೇಕು. ನೂತನ ಕಟ್ಟಡದಲ್ಲಿ ವೀಡಿಯೋ ಕಾನ್ಫರೆನ್ಸ್ ಹಾಲ್ ಅನ್ನು ಅನುಷ್ಠಾನಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ನ್ಯಾಯವಾದಿಗಳಿಗೆ ಎಲ್ಲ ಸೌಲಭ್ಯಗಳಿರುವಂತಹ ಭವನ ಬೇಕು. ಪುಸ್ತಕ ಇಡಲು ಗ್ರಂಥಾಲಯದ ಸಹಿತ ಪೂರಕ ವಾತಾವರಣ ಇರಬೇಕು. ವಕೀಲರ ಸಂಘ ಬಲಾಢ್ಯ ಇದ್ದಾಗ, ನ್ಯಾಯಧೀಶರಿಗೂ ಬಲ ಬಂದಂತೆ. ಉಡುಪಿ ವಕೀಲರ ಸಂಘದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ನಿರ್ಮಾಣವಾಗುತ್ತಿರುವ ಕಟ್ಟಡವು ಕನಿಷ್ಠ 75 ವರ್ಷಗಳು ಬಾಳಿಕೆ ಬರಬೇಕು ಎಂದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಮಾತನಾಡಿ, ಈ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ₹ 15.14 ಕೋಟಿ ಅನುದಾನ ಬಿಡುಗಡೆಗೊಂಡಿದೆ. 2 ನೇ ಹಂತದ ಕಾಮಗಾರಿಗೂ ನೀಲನಕಾಶೆ ಸಿದ್ಧಪಡಿಸಲಾಗಿದೆ ಎಂದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಮೀವುಲ್ಲ, ಪೋಕ್ಸೋ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವಾತ್ಸವ, ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್, ಪ್ರಧಾನ ಸಿವಿಲ್ ನ್ಯಾಯಾಧೀಶ ವಿನಾಯಕ ವಾಂಖಡೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಜೀತು ಆರ್.ಎಸ್., ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಬುತಾಹೀರ್, ಉಡುಪಿ ವಕೀಲರ ಸಂಘದ ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಪ್ರ.ಕಾರ್ಯದರ್ಶಿ ರಾಜೇಶ್ ಎ.ಆರ್., ಹಿರಿಯ ನ್ಯಾಯವಾದಿಗಳಾದ ಶಶಿಕಾಂತ್ ಶೆಟ್ಟಿ, ಮೇರಿ ಶ್ರೇಷ್ಠಾ, ನ್ಯಾಯವಾದಿಗಳಾದ ಗಂಗಾಧರ ಎಚ್.ಎಂ., ರವೀಂದ್ರ ಬೈಲೂರು, ಸಂತೋಷ್ ಮೂಡುಬೆಳ್ಳೆ, ಆನಂದ ಮಡಿವಾಳ, ಸುಕೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles