Saturday, June 28, 2025

spot_img

ಅನಾಥ ಪ್ರಾಣಿಗಳ ರಕ್ಷಣೆ ಮಾಡಿದ ನನಗೆ ದಯಾಮರಣ ನೀಡಿ…

ಸಾಲಿಗ್ರಾಮ : ಕಳೆದ ಕೆಲವು ದಶಕಗಳಿಂದ ನಿರಂತರವಾಗಿ ಅನಾಥ ಅಶಕ್ತ ಪ್ರಾಣಿಗಳನ್ನ ಮಕ್ಕಳಂತೆ ಪೋಷಿಸಿ ಆರೈಕೆ ಮಾಡಿ ಮನೆಯಲ್ಲಿ ಸಾಕಿಕೊಂಡಿದ್ದ ಸಾಲಿಗ್ರಾಮದ ಸುಧೀಂದ್ರ ಐತಾಳ್ ಅವರ ಅನಿಮಲ್ ರೆಸ್ಕ್ಯೂ ಸೆಂಟರ್ ಮೇಲೆ ಪ್ರಾಣಿ ದಯಾ ಸಂಘ ಪೇಟಾ ಧಾಳಿ ಮಾಡಿದೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಅನಾಥ, ಗಾಯಗೊಂಡ ಪ್ರಾಣಿಗಳ ರಕ್ಷಣೆ ಮಾಡಿದ ತಪ್ಪಿಗೆ ನನಗೆ ಕಳೆದ ಕೆಲವು ವರ್ಷಗಳಿಂದ ನಿರಂತರ ಕಿರುಕುಳ ನೀಡುವ ಕೆಲಸವಾಗುತ್ತಿದೆ ನನಗೆ ದಯಾಮರಣ ನೀಡಿ ಎನ್ನುತ್ತಿದ್ದಾರೆ ಸಾಲಿಗ್ರಾಮದ ಸುಧೀಂದ್ರ ಐತಾಳ್…


ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಸಾಲಿಗ್ರಾಮದಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ಸುಧೀಂದ್ರ ಐತಾಳ್ ಮತ್ತು ಅವರ ಕುಟುಂಬ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಪಕ್ಕದ ತಮ್ಮ ಮನೆಯಲ್ಲಿ ಪ್ರಾಣಿ ರಕ್ಷಣಾ ಕೇಂದ್ರವನ್ನ ಹವ್ಯಾಸವಾಗಿ ಮಾಡಿಕೊಂಡು ಬಂದಿದ್ದಾರೆ. ಎಲ್ಲಿ ಯಾವುದೇ ಪ್ರಾಣಿ ಅನಾಥವಾಗಿ ಬಿದ್ದಿರಲಿ ಗಾಯಗೊಂಡು ಅನಾರೋಗ್ಯಕ್ಕೆ ತುತ್ತಾಗಿ ದಾರಿಯಲ್ಲಿ ಬಿದ್ದ ಪ್ರಾಣಿಗಳು ಹೀಗೆ ಅಸಹಾಯಕ ಸ್ಥಿತಿಯಲ್ಲಿರುವ ಪ್ರಾಣಿಗಳನ್ನು ರಕ್ಷಿಸಿ ಅವುಗಳ ಆರೈಕೆ ಮಾಡುವುದು ಸುಧೀಂದ್ರ ಐತಾಳ್ ಅವರಿಗೆ ಇಷ್ಟದ ಕೆಲಸ. ಪ್ರಾಣಿಗಳನ್ನು ಸಾಕುವುದು ಸುಲಭದ ಕೆಲಸವಲ್ಲ ಅವುಗಳಿಗೆ ಬೇಕಾದ ನೀರು ಆಹಾರ ಜೊತೆಗೆ ಶುಚಿತ್ವವನ್ನ ನೋಡಿಕೊಳ್ಳಬೇಕಾದ ಜವಾಬ್ದಾರಿ ಅತಿ ದೊಡ್ಡದು. ಹೀಗೆ ಶುಚಿತ್ವದ ವಿಚಾರದಲ್ಲಿ ಹಲವು ಬಾರಿ ಈ ಪ್ರಾಣಿ ರಕ್ಷಣಾ ಕೇಂದ್ರ ಸುಧೀಂದ್ರ ಐತಾಳ ಹಾಗೂ ಅಕ್ಕಪಕ್ಕದವರ ನಡುವೆ ಜಟಾಪಟಿ ನಡೆಯುತ್ತಾ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಧೀಂದ್ರ ಐತಾಳ್ ಅವರ ಮಾನವೀಯ ಮುಖದ ಪರಿಚಯ ಆಗಾಗಾ ಆಗುತ್ತಲೆ ಇರುತ್ತದೆ. ಇತ್ತೀಚಿಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ವಿಡಿಯೋ ಒಂದು ವೈರಲ್ ಆದ ಬೆನ್ನಲ್ಲಿ ಯಾರು ಆಗದವರು ಸುಧೀಂದ್ರ ಹಿತ್ತಾಳೆ ಅವರ ವಿರುದ್ಧ ಪ್ರಾಣಿ ದಯಾ ಸಂಘಕ್ಕೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿ ಸಾಲಿಗ್ರಾಮಕ್ಕೆ ಬಂದ ಪ್ರಾಣಿ ದಯಾ ಸಂಘ ಪೇಟ ಸ್ಥಳೀಯ ಪಟ್ಟಣ ಪಂಚಾಯತ್ ಪೊಲೀಸ್ ಜಿಲ್ಲಾ ಆಡಳಿತದ ಸಹಭಾಗಿತ್ವದಲ್ಲಿ ದಾಳಿ ನಡೆಸಿ ಸುಮಾರು 200 ಪ್ರಾಣಿಗಳನ್ನು ರಕ್ಷಣೆ ಮಾಡಿ ತೆಗೆದುಕೊಂಡು ಹೋಗಿದ್ದಾರೆ.


ಈ ಸಂದರ್ಭ ಸುಧೀಂದ್ರ ಐತಾಳ್ ಮತ್ತು ಅವರ ಕುಟುಂಬದ ಸದಸ್ಯರು ಕಣ್ಣೀರಿಟ್ಟುಗೋಗೆರೆದಿದ್ದಾರೆ. ಸ್ಥಳೀಯ ಪ್ರಾಣಿಪ್ರೇಮಿಗಳು, ಪ್ರಾಣಿ ದಯಾಸಂಘದ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದಾಗ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಜಟಾಪಡಿ ನಡೆದಿದೆ. ಯಾರೋ ಮಾಡಿದ ಆರೋಪಕ್ಕೆ ನಾನು ಕಷ್ಟಪಟ್ಟು ಸಾಕಿ ಸಲಹಿದ ಪ್ರಾಣಿಗಳನ್ನು ನೀವು ನನ್ನಿಂದ ದೂರ ಮಾಡುತ್ತಿದ್ದೀರಿ ಪ್ರಾಣಿಗಳನ್ನ ಹಿಂತುರುಗಿಸಿ ಇಲ್ಲದಿದ್ದರೆ ನನಗೆ ದಯಾಮರಣ ನೀಡಿ ಎಂದು ಸುಧೀಂದ್ರ ಐತಾಳ್ ಮನವಿ ಮಾಡಿದ್ದಾರೆ. ಇನ್ನು ಈ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಪ್ರಾಣಿ ದಯಾ ಸಂಘದವರು ಮಾಡಬೇಕಾದ ಕೆಲಸವನ್ನ ಸುಧೀಂದ್ರ ಐತಾಳ್ ಅವರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಗಾಯವಾಗಿ ಬಿದ್ದ ಪ್ರಾಣಿಗಳ ರಕ್ಷಣೆಗೆ ಪ್ರಾಣಿ ದಯಾ ಸಂಘ ಯಾವತ್ತೂ ಬಂದಿಲ್ಲ. ಪ್ರಾಣಿ ದಯಾ ಸಂಘದವರು ಮಾಡಬೇಕಾಗಿದ್ದ ಕೆಲಸ ಸುಧೀಂದ್ರ ಐತಾಳ್ ಅವರು ಮಾಡುತ್ತಿರುವುದೆ ದೊಡ್ಡ ತಪ್ಪೆ ??? ಹಾಗಾದರೆ ಇಲ್ಲಿ ನಿಜವಾದ ಪ್ರಾಣಿ ಪ್ರೇಮಿಗಳು ಯಾರು ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಕೆಲವು ವರ್ಷಗಳ ಹಿಂದೆ ಅರಣ್ಯ ಮತ್ತು ವನ್ಯ ಜೀವಿ ಇಲಾಖೆಯ ಅಧಿಕಾರಿಗಳು ಧಾಳಿ ಮಾಡಿ ಹಲವು ಪ್ರಾಣಿಗಳನ್ನ ವಶಕ್ಕೆ ಪಡೆದಿದ್ದರು. ನಂತರ ವಶಕ್ಕೆ ಪಡೆದ ಪ್ರಾಣಿಗಳು ಎಲ್ಲಿವೆ ?. ಪ್ರಾಣಿ ದಯಾ ಸಂಘದವರು ಮಾಡಬೇಕಾದ ಕೆಲಸ ನಾನು ಮಾಡುತ್ತಿದ್ದೇನೆ ಪ್ರಾಣಿಗಳ ರಕ್ಷಣೆ ಮಾಡಿದ್ದೆ ನನ್ನ ತಪ್ಪು ಎನ್ನುವುದಾದರೆ ನನಗೆ ದಯಮರಣ ನೀಡಿ

ಸುಧೀಂದ್ರ ಐತಾಳ್

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles