ಕೋಟ : ಉಡುಪಿ ಜಿಲ್ಲಾ ಸಂಸ್ಕೃತ ಅಧ್ಯಾಪಕರ ಸಂಘದ ವತಿಯಿಂದ ಇತ್ತೀಚೆಗೆ ದಿವಂಗತರಾದ ಎಸ್ ವಿ ಎಸ್ ಪದವಿ ಪೂರ್ವ ಕಾಲೇಜು ಇಲ್ಲಿನ ಸಂಸ್ಕೃತ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಸುಬ್ರಹ್ಮಣ್ಯ ತಂತ್ರಿ ಮತ್ತು ನಿಟ್ಟೂರು ಪ್ರೌಢಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ವಿದ್ವಾನ್ ಎಚ್ ಎನ್ ಶೃಂಗೇಶ್ವರ್ ಇವರರೀರ್ವರಿಗೂ ಶ್ರದ್ಧಾಂಜಲಿಯನ್ನು ಎಸ್ ಎಂ ಎಸ್ ಪಿ ಸಂಸ್ಕೃತ ಪ್ರೌಢಶಾಲೆಯಲ್ಲಿ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಕೃತ ಶಿಕ್ಷಕ ಸಂಘದ ಸ್ಥಾಪಕ ಅಧ್ಯಕ್ಷರಾದ ವಿದ್ವಾನ್ ಸುಬ್ರಾಯ ಎಂ ಭಟ್, ನಿಕಟಪೂರ್ವ ಅಧ್ಯಕ್ಷರಾದ ವಿದ್ವಾನ್ ಮಾಧವ ಅಡಿಗ, ಈಗಿನ ಅಧ್ಯಕ್ಷರಾದ ವಿದ್ವಾನ್ ಪ್ರಭಾಕರ್ ಭಟ್, ನಿಕಟಪೂರ್ವ ಕಾರ್ಯದರ್ಶಿ ವಿದ್ವಾನ್ ಎಚ್ ಎನ್ ವೆಂಕಟೇಶ್, ಈಗಿನ ಕಾರ್ಯದರ್ಶಿ ವಿದ್ವಾನ್ ಅಶೋಕ್ ಹೆಗಡೆ ಕೋಶಾಧಿಕಾರಿ ರಾಮಚಂದ್ರ ಭಟ್, ಸದಸ್ಯರುಗಳಾದ ವಿದ್ವಾನ್ ನಾಗರಾಜ ಹೆಗಡೆ, ಶಂಭು ಭಟ್ , ವಿದ್ವಾನ್ ಎಲ್ಎಸ್ ಭಟ್, ವಿದ್ವಾನ್ ಸರ್ವೋತ್ತಮ ಆಚಾರ್ಯ, ಮೃತರ ಮಿತ್ರರಾದ ವಿದ್ವಾನ್ ಮಧುಕೇಶ್ವರ ಹೆಗಡೆ, ಹಾಗೂ ಮಾಧವ ಭೈಟ್ಮಂಗಳ್ಕರ್ ಉಪಸ್ಥಿತರಿದ್ದರು ಎಲ್ಲರೂ ಮರೆತರೆ ಕುಟುಂಬಕ್ಕೆ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲಿ ಭತ್ತರಿಗೆ ಭಗವಂತನ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿ, ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಪುಷ್ಪ ನಮನವನ್ನು ಸಲ್ಲಿಸ