ಉಡುಪಿ : ಬಂಗಾರ ಕಾಮತ್ ಎಂದೇ ಪ್ರಸಿದ್ದರಾದ ಕಟಪಾಡಿ ಕಾಮತ್ ಮನೆತನದವರ ಸುಮಾರು 200 ವರ್ಷಗಳ ಇತಿಹಾಸವಿರುವ ಮೂಲನಾಗ ಬನದ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಇದೇ ತಿಂಗಳ 8 ಹಾಗೂ 9ರಂದು ವಿಧಿ ಪೂರ್ವಕವಾಗಿ ವೇದಮೂರ್ತಿ ಶಿವಾನಂದ ಭಟ್ ರವರ ನೇತ್ರತ್ವದಲ್ಲಿ ಸಕಲ ಕಾಮತ್ ಕುಟುಂಬದವರ ಸಮ್ಮುಖದಲ್ಲಿ ನೆರೆವರೀತು.

ಕಾಮತ್ ಕುಟುಂಬದ ಪ್ರಮುಖರಾದ ತಾರಾನಾಥ್ ಕಾಮತ್, ಗಿರಿಧರ್ ಕಾಮತ್, ನಾಗರಾಜ್ ಕಾಮತ್, ಬಾಲಕ್ರಷ್ಣ ಕಾಮತ್ , ಹರೀಶ್ ಕಾಮತ್, ವಿನೋದ್ ಕಾಮತ್, ಜಗದೀಶ್ ಕಾಮತ್ ಈ ಸಂಧರ್ಭದಲ್ಲಿ ಹಾಜರಿದ್ದು, ನರೇಂದ್ರ ಕಾಮತ್ ದಂಪತಿಗಳ ಯಜಮಾನಿಕೆಯಲ್ಲಿ ಕಾರ್ಯಕ್ರಮಗಳು ನಡೆಯಿತು. ಕಾಮತ್ ಕುಟುಂಬದವರಿಗೆ ನಾಗಾರಾಧನೆಗೆ ಜಾಗವನ್ನೀತ ಈ ಜಾಗದ ಧನಿಗಳಾದ ತಾನಾಜಿ ಹೆಗ್ಡೆ ದಂಪತಿಗಳು ಮತ್ತು ಭರತ್ ಹೆಗ್ಡೆ ಯವರಿಗೆ ಗೌರವಿಸಲಾಯಿತು.
