Saturday, June 28, 2025

spot_img

ಭೀಕ್ಷಾಟನೆಯಲ್ಲಿ ನಿರತವಾಗಿರುವ ಶಾಲಾ ವಿದ್ಯಾರ್ಥಿನಿಯರ ರಕ್ಷಣೆ

ಉಡುಪಿ : ಶ್ರೀ ಕೃಷ್ಣ ಮಠದ‌ ಪರಿಸರದಲ್ಲಿ ಭೀಕ್ಷಾಟನೆಯಲ್ಲಿ ನಿರತವಾಗಿರುವ ಇರ್ವರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರನ್ನು ರಾಜಾಂಗಣ‌ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟಿರುವ ಬಾಲಕಿಯರನ್ನು ನಿಟ್ಟೂರು ಬಾಲಕೀಯರ ಬಾಲ ಭವನದಲ್ಲಿ ಪುರ್ನವಸತಿ ಕಲ್ಪಿಸಲಾಗಿದೆ.

ರಕ್ಷಿಸಲ್ಪಟ್ಟ ಬಾಲಕೀಯರು ನಿಟ್ಟೂರು ಮಧ್ವರಾಜ ನಗರದ ಕಾಲೋನಿಯ ನಿವಾಸಿಗಳು. 13 ವರ್ಷದ ಬಾಲಕಿ 7 ನೇ ತರಗತಿ, ಹಾಗೂ 10 ವರ್ಷದ ಬಾಲಕಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಕಾರ್ಯಚರಣೆಯಲ್ಲಿ ಜಿಲ್ಲಾ ಬಾಲಕಾರ್ಮಿಕರ ಯೋಜನ ಸಂಘದ ನಿರ್ದೆಶಕಿ ಅಮೃತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಅಂಬಿಕಾ ಎಸ್, ಮ‌ಕ್ಕಳ‌ ರಕ್ಷಣಾ ಘಟಕದ ಸುನಂದ, ಸಾಮಾಜಿಕ ಕಾರ್ಯಕರ್ತೆ‌ ಸವಿತಾ, ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು ಭಾಗಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles