Tuesday, March 3, 2026

spot_img

ನ್ಯಾಯಾಲಯದ ಮೆಟ್ಟಿಲಲ್ಲಿ ವೃದ್ದೆಯ ಆಕ್ರಂದನ..!?

ಉಡುಪಿ : ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಉಡುಪಿಯ ನ್ಯಾಯಾಲಯದ ಮೆಟ್ಟಿಲಲ್ಲಿ ಕುಳಿತುಕೊಂಡು ಆಕ್ರಂದನ ಮಾಡುತ್ತಾ ನನಗೆ ಬೇಕಾಗುವ ಸೌಲಭ್ಯಗಳು ನೆಮ್ಮದಿ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಮಾಹಿತಿ ಪಡೆದ ಸಮಾಜಸೇವಲ ವಿಶು ಶೆಟ್ಟಿ ಅಂಬಲಪಾಡಿ ನೆರವಿಗೆ ಧಾವಿಸಿ, ವೃದ್ದೆಗೆ ಸಮಾಧಾನದ ಮಾತುಗಳನ್ನಾಡಿ ರಕ್ಷಣೆ ಮಾಡಿದ್ದಾರೆ.                         

 ಈ ಬಗ್ಗೆ ಸಖಿ ಕೇಂದ್ರ, ಹಿರಿಯ ನಾಗರಿಕ ಸಹಾಯವಾಣಿ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ವಿಶು ಶೆಟ್ಟಿ ಮಾಹಿತಿ ನೀಡಿ ಸಖಿ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.

ವೃದ್ದೆಯು ಬಹಳಷ್ಟು ಕಣ್ಣೀರಿಡುತ್ತಿರುವಾಗ ನೈಜ ತೊಂದರೆಯೋ, ವಯೋ ಸಹಜ ಮಾನಸಿಕ ತೊಂದರೆಯೋ ಎಂಬುದು ಸಂಬಂಧಪಟ್ಟವರ ತನಿಖೆಯಿಂದ ತಿಳಿಯಬೇಕಾಗಿದೆ.

ವೃದ್ದೆಗೆ ನ್ಯಾಯಯುತವಾದ ಹಾಗೂ ಸಮಾಧಾನಕರವಾದ ನ್ಯಾಯ ದೊರಕಿಸಿಕೊಡಲಿ ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles